ಶ್ರೀ ಮಂಜುನಾಥ ಟೆಲಿ ಅಂಡ್ ಸಿನಿ ಪ್ರೊಡಕ್ಸನ್ ಲಾಂಛನದಲ್ಲಿ ಹೆಚ್.ವಿ. ಅಣ್ಣಪ್ಪ ನಿರ್ಮಿಸುತ್ತಿರುವ ಪಗಡೆ ಚಿತ್ರಕ್ಕೆ ಕಳೆದವಾರ ವಿದ್ಯಾಪೀಠ ಸರ್ಕಲ್ ಬಳಿ ಇರುವ ಶಾರಿಕಾ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ಕಾರ್ಯ ನಡೆಯಿತು. ಸಧ್ಯದಲ್ಲೇ ಪ್ರಥಮ ಪ್ರತಿ ಬರಲಿದ್ದು, ಜನವರಿ ತಿಂಗಳ ಕೊನೆಯ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಬಿ.ಎ. ಪುರುಷೋತ್ತಮ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗೌರಿವೆಂಕಟೇಶ್ ಛಾಯಾಗ್ರಹಣ, ಸಾಗರ್ ಭೂಷಣ್ ಸಂಗೀತ, ಕ್ರಿಷ್ ಜೋಶಿ-ಚಿತ್ರಕಥೆ, ಸಂಭಾಷಣೆ, ಹರ್ಷವರ್ಧನ್ ಕಥೆ, ಹೈಟ್ ಮಂಜು ನೃತ್ಯ ನಿರ್ದೇಶನ, ಎಸ್. ಮನೋಹರ್ ಸಂಕಲನ, ಶರಣ್ ಗದ್ವಾಲ್ ಸಹ ನಿರ್ದೇಶನವಿದೆ. ವಿಶ್ವಾಸ್ ಭಾರದ್ವಜ್, ಗಮ್ಯ, ಧರ್ಮ, ಅಶೋಕ್, ರವಿಶಂಕರ್, ಅಚ್ಯುತ್, ಶ್ರೀನಿವಾಸ ಪ್ರಭು, ಶ್ರೀನಾಥ್ ವಶಿಷ್ಠ, ಯತಿರಾಜ್, ಟೆನ್ನಿಸ್ ಕೃಷ್ಣ, ಹೊನ್ನಾವಳ್ಳಿ ಕೃಷ್ಣ, ಹರ್ಷ, ರವಿಕಿರಣ್ ತಾರಾಗಣವಿದೆ.